ರಾಜ್ ವಿಷ್ಣು ೨೦೧೭ ರ ಕನ್ನಡ ಭಾಷೆಯ ಹಾಸ್ಯ ಚಲನಚಿತ್ರವಾಗಿದ್ದು, ಇದನ್ನು ಕೆ. ಮಾದೇಶ್ ನಿರ್ದೇಶಿಸಿದ್ದಾರೆ ಮತ್ತು ರಾಮು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಶರಣ್ ಮತ್ತು ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿದ್ದರೆ, ವೈಭವಿ ಶಾಂಡಿಲ್ಯ , ಶ್ರೀನಿವಾಸ ಮೂರ್ತಿ ಮತ್ತು ಭಜರಂಗಿ ಲೋಕಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ರಾಜೇಶ್ ಕಟ್ಟಾ ಅವರ ಛಾಯಾಗ್ರಹಣವಿದೆ. ಈ ಚಿತ್ರವು ತಮಿಳಿನ ರಜಿನಿ ಮುರುಗನ್ (೨೦೧೬) ಚಿತ್ರದ ರಿಮೇಕ್ ಆಗಿದ್ದು,ಅದರಲ್ಲಿ ಶಿವಕಾರ್ತಿಕೇಯನ್, ಕೀರ್ತಿ ಸುರೇಶ್, ಸೂರಿ ನಟಿಸಿದ್ದರು ಮತ್ತು ಅದರನ್ನು ಪೊನ್ರಾಮ್ ನಿರ್ದೇಶಿಸಿದ್ದರು. == ಕಥಾವಸ್ತು == ರಜಿನಿ ಮುರುಗನ್ ಮಧುರೈನ ನಿರುದ್ಯೋಗಿ ಯುವಕನಾಗಿದ್ದು, ತನ್ನ ಆತ್ಮೀಯ ಸ್ನೇಹಿತ ತೋಟತ್ರೀಯೊಂದಿಗೆ ತಿರುಗಾಡುತ್ತಾ ತನ್ನ ದಿನಗಳನ್ನು ಕಳೆಯುತ್ತಾನೆ ದೊಡ್ಡ ಆಸ್ತಿ ಹೊಂದಿರುವ ಅತ್ಯಂತ ಗೌರವಾನ್ವಿತ ಸಜ್ಜನ ಅಜ್ಜ ಅಯ್ಯಂಕಲೈ ಅವರಿಗೆ ಆಹಾರವನ್ನು ಪೂರೈಸುತ್ತಿರುತ್ತಾನೆ. ಅಯ್ಯಂಕಲೈ ತಮ್ಮ ಎಲ್ಲಾ ಆಸ್ತಿಯನ್ನು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಹಂಚಲು ಬಯಸುತ್ತಾರೆ, ಆದರೆ ರಜಿನಿ ಮುರುಗನ್ ಮತ್ತು ಸ್ಥಳೀಯ ಶಾಲೆಯ ಮುಖ್ಯೋಪಾಧ್ಯಾಯರಾದ ಅವರ ತಂದೆ ಮಲ್ಲಿಗರಾಜನ್ ಅವರನ್ನು ಹೊರತುಪಡಿಸಿ, ಕುಟುಂಬದ ಉಳಿದವರು ವಿದೇಶದಲ್ಲಿ ನೆಲೆಸಿದ್ದಾರೆ ಮತ್ತು ಮಧುರೈಗೆ ಭೇಟಿ ನೀಡುವುದಿಲ್ಲ. ಏತನ್ಮಧ್ಯೆ, ರಜಿನಿ ಮುರುಗನ್ ಮೂರು ತಿಂಗಳೊಳಗೆ ಮದುವೆಯಾಗುತ್ತಾನೆ ಮತ್ತು ಶ್ರೀಮಂತನಾಗುತ್ತಾನೆ ಎಂದು ಹೇಳಿರುವ ಜ್ಯೋತಿಷಿಯ ಸಲಹೆಯಂತೆ`, ರಜಿನಿ ಮುರುಗನ್ ತನ್ನ ಬಾಲ್ಯದ ಪ್ರಿಯತಮೆ ಕಾರ್ತಿಕಾ ದೇವಿಯನ್ನು ಓಲೈಸಲು ಪ್ರಾರಂಭಿಸುತ್ತಾನೆ. ಕಾರ್ತಿಕಾ ತಂದೆ ನೀಲಕಂದನ್, ರಜನಿಕಾಂತ್ ಅವರ ಕಟ್ಟಾ ಅಭಿಮಾನಿಯಾಗಿದ್ದು , ಮಲ್ಲಿಗರಾಜನ್ ಅವರ ಆತ್ಮೀಯ ಸ್ನೇಹಿತರಾಗಿದ್ದರು ಮತ್ತು ರಜಿನಿ ಮುರುಗನ್ ಜನಿಸಿದಾಗ ಅವನಿಗೆ ಆ ಹೆಸರನ್ನು ಇಟ್ಟಿದ್ದರು, ಆದರೆ ರಜಿನಿ ಮುರುಗನ್ ಮತ್ತು ಕಾರ್ತಿಕಾ ಅವರು ಬಾಲ್ಯದಲ್ಲಿ ಒಳಗೊಂಡಿರುವ ತಪ್ಪು ತಿಳುವಳಿಕೆಯಿಂದ ಮಲ್ಲಿಗರಾಜನ್ ಮತ್ತು ಅವರ ಕುಟುಂಬದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಅಂದಿನಿಂದ, ರಜಿನಿ ಮುರುಗನ್ ಮತ್ತು ಕಾರ್ತಿಕಾ ಮಾತನಾಡುತಿರಲಿಲ್ಲ, ನೀಲಕಂದನ್ ಇಬ್ಬರ ನಡುವೆ ಯಾವುದೇ ರೀತಿಯ ಸಂಪರ್ಕವನ್ನು ನಿಷೇಧಿಸಿದ್ದರು. ಅದೇನೇ ಇದ್ದರೂ, ರಜಿನಿ ಮುರುಗನ್ ಕಾರ್ತಿಕಾ ಅವರ ಮನೆಯ ಹೊರಗೆ ಚಹಾ ಅಂಗಡಿಯನ್ನು ತೆರೆದು ಅವಳ ಹತ್ತಿರ ಇರಲು ಮತ್ತು ಹಗಲು ರಾತ್ರಿ ಅವಳನ್ನು ಹಿಂಬಾಲಿಸುತ್ತಾರೆ. ಒಬ್ಬ ಗ್ರಾಹಕ ಅಂಗಡಿಯನ್ನು ನಾಶಪಡಿಸುತ್ತಾನೆ. ನಂತರ, ರಜಿನಿ ಮತ್ತು ತೋಟತ್ರೀ ರಿಯಲ್ ಎಸ್ಟೇಟ್ ಕಂಪನಿಯನ್ನು ಪ್ರಾರಂಭಿಸುತ್ತಾರೆ. ಉದ್ಯಮಿಗಳಿಂದ ₹ ೧೦೦,೦೦೦ ರೂಪಾಯಿ ಸುಲಿಗೆ ಮಾಡುವ ಏಕೈಕ ಕೆಲಸವಾಗಿರುವ ದರೋಡೆಕೋರ "ಎಜ್ರೈ" ಮೂಕನ್, ಅದೇ ಮೊತ್ತವನ್ನು ರಜಿನಿ ಮುರುಗನ್‌ನಿಂದ ಲಪಟಾಯಿಸಲು ಪ್ರಯತ್ನಿಸುತ್ತಾನೆ, ಆದರೆ ವಿಫಲನಾಗಿ ಅವನಿಗೆ ₹ ೧೦೦,೦೦೦ ಪಾವತಿಸುತ್ತಾನೆ. ರಜನಿ ಮುರುಗನ್ ಅವರ ಚೇಷ್ಟೆಗಳಿಂದ ಬೇಸತ್ತಿರುವ ಅಯ್ಯಂಕಾಲೈ, ರಜಿನಿ ಮುರುಗನ್ ಗೆ ಅನುಕೂಲವಾಗಲೆಂದು ತಮ್ಮ ಆಸ್ತಿಯನ್ನು ವಿಭಜಿಸಲು ನಿರ್ಧರಿಸುತ್ತಾರೆ. ಅವನು ತಾನು ಸತ್ತ ಹಾಗೆ ಸುದ್ದಿ ಮಾಡುತ್ತಾನೆ, ಅದು ಅವನ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಮಧುರೈಗೆ ಬರುವಂತೆ ಮಾಡುತ್ತದೆ. ಮೂಕನ್ ತಾನೂ ಅಯ್ಯಂಕಾಳೈಯ ಮೊಮ್ಮಗ (ಅಯ್ಯಂಕಲೈ ಅವರ ಮೊದಲ ಹೆಂಡತಿಯ ಮಗನ ಮೂಲಕ) ಎಂದು ಹೇಳಿಕೊಳ್ಳುತ್ತಾನೆ ಮತ್ತು ಆಸ್ತಿಯಲ್ಲಿ ತನ್ನ ಪಾಲಿನ ಬೇಡಿಕೆಯನ್ನು ಪ್ರಾರಂಭಿಸುತ್ತಾನೆ. ಇದು ರಜಿನಿ ಮುರುಗನ್ ಮತ್ತು ಮೂಕನ್ ನಡುವೆ ಘರ್ಷಣೆಗೆ ಕಾರಣವಾಗುತ್ತದೆ ಮತ್ತು ಅವರ ಜಗಳವನ್ನು ಶೀಘ್ರದಲ್ಲೇ ಪಂಚಾಯತ್ ಮುಂದೆ ತರಲಾಗುತ್ತದೆ. ಪಂಚಾಯತಿಯು ಅಯ್ಯಂಕಲೈ ಮತ್ತು ರಜಿನಿ ಮುರುಗನ್ ಪರವಾಗಿ ತೀರ್ಪು ಪ್ರಕಟಿಸುತ್ತದೆ. ಸೋಲನ್ನು ಒಪ್ಪಿಕೊಂಡ ಮೂಕನ್, ಪರಿಹಾರವಾಗಿ ರಜಿನಿ ಮುರುಗನ್ ಅವರಿಂದ ₹೧,00,000 ರೂಪಾಯಿ ಪಡೆಯುತ್ತಾನೆ. ರಜಿನಿ ಮುರುಗನ್ ಅವರಿಂದ ₹೧,00,000 ರೂಪಾಯಿ ವಾಪಸ್ ಪಡೆಯಲು ಮೂಕನ್ ಈ ನಾಟಕ ಮಾಡಿದ್ದಾನೆ ಎಂಬುದು ನಂತರ ಬಹಿರಂಗವಾಗುತ್ತದೆ. ಏತನ್ಮಧ್ಯೆ, ಕಾರ್ತಿಕಾ ರಜಿನಿ ಮುರುಗನ್ ಅವರ ಪ್ರೀತಿಯನ್ನು ಸ್ವೀಕರಿಸುತ್ತಾರೆ ಮತ್ತು ನೀಲಕಂದನ್ ಅವರ ಸಂಬಂಧವನ್ನು ಅನುಮೋದಿಸಲು ಪ್ರಾರಂಭಿಸುತ್ತಾರೆ. ಕೊನೆಯಲ್ಲಿ, ಅಯ್ಯಂಕಲೈ ತನ್ನ ಮೊದಲ ಹೆಂಡತಿಯ ಮಗನ ಮೂಲಕ ಮೊಮ್ಮಗನನ್ನು ಹೊಂದಿದ್ದಾನೆ ಎಂದು ಬಹಿರಂಗಪಡಿಸುತ್ತಾನೆ. ಮೊಮ್ಮಗ ಬೇರೆ ಯಾರೂ ಅಲ್ಲ, ವರೂತಪದತ ವಲಿಬಾರ್ ಸಂಗಮ್‌ನ ಬೋಸಪಾಂಡಿ ಎಂದು ತಿಳಿದುಬಂದಿದೆ. ಬೋಸಪಾಂಡಿ ತನ್ನ ಅಜ್ಜನ ಆಸ್ತಿಯಲ್ಲಿ ತನ್ನ ಪಾಲನ್ನು ಸ್ವೀಕರಿಸಲು ನಿರಾಕರಿಸುತ್ತಾನೆ, ಕುಟುಂಬ ಆಸ್ತಿಯನ್ನು ಮಾರಾಟ ಮಾಡದಂತೆ ಸಲಹೆ ನೀಡುತ್ತಾನೆ ಮತ್ತು ಬದಲಿಗೆ ಅದನ್ನು 5-ಸ್ಟಾರ್ ಹೋಟೆಲ್ ಆಗಿ ಪರಿವರ್ತಿಸಿ ರಜಿನಿ ಮುರುಗನ್ಗೆ ಹಸ್ತಾಂತರಿಸುತ್ತಾನೆ. ಅಯ್ಯಂಕಲೈ ಮತ್ತು ರಜಿನಿ ಮುರುಗನ್ ಅವರನ್ನು ಒಪ್ಪುತ್ತಾರೆ. == ಪಾತ್ರವರ್ಗ == ರಾಜ್-ವಿಷ್ಣು ಪಾತ್ರದಲ್ಲಿ ಶರಣ್ ಶಂಕರ್ ನಾಗ್ ಪಾತ್ರದಲ್ಲಿ ಚಿಕ್ಕಣ್ಣ ಸಂಜೀವಪ್ಪ ಪಾತ್ರದಲ್ಲಿ ಶ್ರೀನಿವಾಸ ಮೂರ್ತಿ ಲಾವಣ್ಯ ಪಾತ್ರದಲ್ಲಿ ವೈಭವಿ ಶಾಂಡಿಲ್ಯ ಪಿ.ರವಿಶಂಕರ್ ಸಾಧು ಕೋಕಿಲ ಅಚ್ಯುತ್ ಕುಮಾರ್ ವೀಣಾ ಸುಂದರ್ ರಮೇಶ್ ಪಂಡಿತ್ ಮಿಮಿಕ್ರಿ ಗೋಪಿ ಶ್ರೀಮುರಳಿ (ವಿಶೇಷ ಪಾತ್ರ) ಸೌರವ್ ಲೋಕೇಶ್ == ಹಿನ್ನೆಲೆಸಂಗೀತ == ಯೋಗರಾಜ್ ಭಟ್, ವಿ. ನಾಗೇಂದ್ರ ಪ್ರಸಾದ್ ಮತ್ತು ಕವಿರಾಜ್ ಬರೆದಿರುವ ಸಾಹಿತ್ಯದೊಂದಿಗೆ ಅರ್ಜುನ್ ಜನ್ಯ ಅವರು ಸಂಯೋಜಿಸಿದ್ದಾರೆ. == ಬಿಡುಗಡೆ == ಚಲನಚಿತ್ರವು ೪ ಆಗಸ್ಟ್ ೨೦೧೭ ರಂದು ಬಿಡುಗಡೆಯಾಯಿತು. ಬಿಡುಗಡೆಯಾದ ಒಂದು ತಿಂಗಳ ನಂತರ, ಚಿತ್ರವು ಉದಯ ಟಿವಿಯಲ್ಲಿ ಪ್ರೀಮಿಯರ್ ಆಗಿತ್ತು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ರಾಜ್ ವಿಷ್ಣು (ಚಲನಚಿತ್ರ) ಫೇಸ್‌ಬುಕ್‌ನಲ್ಲಿ ರಾಜ್ ವಿಷ್ಣು @ ಐ ಎಮ್ ಡಿ ಬಿ